ದಿನಾಂಕ: 06.03.2025 ರಂದು ಲಕ್ಷ್ಮಣ ನಿಂಬರಗಿ, ಪೊಲೀಸ್ ಅಧೀಕ್ಷಕರು, ವಿಜಯಪುರ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ, ಶಂಕರ ಮಾರಿಹಾಳ ಮತ್ತು ರಾಮನಗೌಡ ಹಟ್ಟಿ ಹಾಗೂ ಡಿಎಸ್ಪಿ ಬಸವರಾಜ ಯಲಿಗಾರ ರವರ ಮಾರ್ಗದರ್ಶನದಲ್ಲಿ ಮಲ್ಲಯ್ಯ ಮಠಪತಿ, ಸಿಪಿಐ ಗೋಲಗುಂಬಜ್ ವೃತ್ತ ರವರ ನೇತೃತ್ವದಲ್ಲಿ ಜ್ಯೋತಿ ಖೋತ, ಪಿಎಸ್ಐ ಎಪಿಎಮ್ಸಿ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿ ಜನರು ಖಚಿತ ಮಾಹಿತಿಯನ್ನು ಆಧರಿಸಿ, ವಿಜಯಪುರದ ಇಂಡಸ್ಟ್ರೀಯಲ್ ಏರಿಯಾ, ಕೆ.ಐ.ಎ.ಡಿ.ಬಿ ಹತ್ತಿರ, ಆರೋಪಿತನಾದ; ನಯೀಮ ಸಿರಾಜ್ ಶಾಮಣ್ಣವರ ಸಾ:ಅಹಿರಸಂಗ ತಾ: ಇಂಡಿ ಹಾಲಿ ವಾಸ: ಹವೇಲಿ ಗಲ್ಲಿ, ವಿಜಯಪುರ
ಈತನಿಗೆ ವಶಕ್ಕೆ ಪಡೆದು ಆತನ ಹತ್ತಿರ ಅನಧೀಕೃತವಾಗಿ ಇಟ್ಟುಕೊಂಡಿದ್ದ 01 ಕಂಟ್ರಿ ಪಿಸ್ತೂಲ್ ಹಾಗೂ 01 ಸಜೀವ ಗುಂಡು ಜಪ್ತ ಮಾಡಿಕೊಳ್ಳಲಾಗಿದ್ದು, ಈ ಬಗ್ಗೆ ಎಪಿಎಮ್ಸಿ ಪೊಲೀಸ್ ಠಾಣೆಯ ಗುನ್ನೆ ನಂ: 22/2025, ಕಲಂ: 25(1)(a), 25(1a), 29(a), 29(b) ಭಾರತೀಯ ಆಯುಧ ಕಾಯ್ದೆ-1959 ರ ಅಡಿ ಪ್ರಕರಣ ದಾಖಲಿಸಿ, ತನಿಖೆ ಕೈಕೊಂಡು ಆರೋಪಿತನಿಗೆ ವಿಚಾರಣೆ ಮಾಡಿದಾಗ ಇನ್ನೂ ಇಬ್ಬರಿಗೆ ಕಂಟ್ರಿ ಪಿಸ್ತೂಲ್ಗಳನ್ನು ಪೂರೈಸಿರುವುದಾಗಿ ಮಾಹಿತಿ ನೀಡಿದ ಮೇರೆಗೆ ದಿನಾಂಕ: 12.03.2025 ರಂದು ಆರೋಪಿತರಾದ;
2) ನಿಹಾಲ @ ನೇಹಾಲ್ ಮಹಿಬೂಬಸಾಬ ತಾಂಬೋಳಿ, 25 ವರ್ಷ, ಸಾ: ಭವಾನಿ ನಗರ, ವಿಜಯಪುರ, ಈತನಿಗೆ ವಶಕ್ಕೆ ಪಡೆದು ಆತನ ಹತ್ತಿರ 03 ಕಂಟ್ರಿ ಪಿಸ್ತೂಲ್ ಹಾಗೂ 04 ಸಜೀವ ಗುಂಡು ಹಾಗೂ
3) ಸಿದ್ದು @ ಸಿದ್ಯಾ ಗುರುಪಾದ ಮೂಡಲಗಿ @ ಮೂಡಂಗಿ, 29 ವರ್ಷ ಸಾ: ಯೋಗಾಪೂರ ಕಾಲೋನಿ ವಿಜಯಪುರ ವಶಕ್ಕೆ ಪಡೆದು ಆತನ ಹತ್ತಿರ 01 ಕಂಟ್ರಿ ಪಿಸ್ತೂಲ್ ಹಾಗೂ 01 ಸಜೀವ ಗುಂಡು,
ಈ ರೀತಿ ಮೂರು ಜನ ಆರೋಪಿತರಿಂದ ಒಟ್ಟು 05 ಕಂಟ್ರಿ ಪಿಸ್ತೂಲ್ ಹಾಗೂ 06 ಸಜೀವ ಗುಂಡುಗಳನ್ನು ಜಪ್ತ ಮಾಡಿಕೊಂಡು, ಆರೋಪಿತರನ್ನು ದಸ್ತಗೀರ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಸದರಿ ಪ್ರಕರಣದಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ ಅಧಿಕಾರಿಗಳಾದ ಶ್ರೀ ಮಲ್ಲಯ್ಯ ಮಠಪತಿ, ಸಿಪಿಐ ಗೋಲಗುಂಬಜ್ ವೃತ್ತ, ಶ್ರೀಮತಿ ಜ್ಯೋತಿ ಖೋತ, ಪಿಎಸ್ಐ ಎಪಿಎಮ್.ಸಿ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿ ಜನರಾದ ಆಸಿಫ್.ಎ. ಗುಡಗುಂಟಿ ಸಿಎಚ್ಸಿ-409, ಸಂತೋಷ ಮೇಲಸಕ್ಕರಿ ಸಿಪಿಸಿ-1893, ರಮೇಶ ಜಾಧವ ಸಿಪಿಸಿ-1875, ಎಸ್.ಎ.ಬನಪಟ್ಟಿ ಸಿಪಿಸಿ-1502, ಆಸೀಫ್ ಲಷ್ಕರಿ ಸಿಪಿಸಿ-1802, ಯೋಗೇಶ ಮಾಳಿ ಸಿಪಿಸಿ-1745, ಭೀಮಾಶಂಕರ ಮಖಣಾಪೂರ ಸಿಪಿಸಿ-1751, ಆನಂದ ಹಿರೇಕುರಬರ ಸಿಪಿಸಿ-1887. ಎಸ್.ಎ.ಪೂಜಾರಿ ಸಿಪಿಸಿ-739, ಎಸ್.ಬಿ.ತೆಲಗಾಂವ ಸಿಪಿಸಿ-1614, ಎಸ್.ಎಸ್.ಬಿರಾದಾರ ಸಿಪಿಸಿ-1873, ಶ್ರೀಕಾಂತ ಪೂಜಾರಿ ಸಿಪಿಸಿ-1858 ಇವರುಗಳ ಕರ್ತವ್ಯವನ್ನು ಶ್ಲಾಘಿಸಲಾಗಿದೆ.
ಲಕ್ಷ್ಮಣ ನಿಂಬರಗಿ, ಐಪಿಎಸ್
ಪೊಲೀಸ್ ಅಧೀಕ್ಷಕರು,

