ವಿಜಯಪುರ ನಗರದಲ್ಲಿ ದಿನೆ ದಿನೆ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿದೆ ನಿನ್ನೆ ನಡೆದ ಬಾಗಪ್ಪ ಹರಿಜನ ಸಾವಿನ ಕಾವು ಇನ್ನು ತಣ್ಣಗಾಗಿಲ್ಲ ಮತ್ತೆ ವಿಜಯಪುರ ಫೈರಿಂಗ್ ಮೂಲಕ ಸುದ್ದಿಯಲ್ಲಿದೆ.
ಈ ಬಾರಿ ಅಟ್ಯಾಕ್ ಮಾಡಿದ್ದು ಅಪರಾಧಿ ಅಲ್ಲ ವಿಜಯಪುರ ಪೊಲೀಸರು ಕೊಲೆ ಪ್ರಕರಣದ ಆರೋಪಿಗೆ ಕಂಟ್ರಿ ಪಿಸ್ತೂಲ್ ಒದಗಿಸಿದ ಆರೋಪಿ ಬಂಧಿಸಲು ಹೋದಾಗ ಪೊಲೀಸರು ಫೈರಿಂಗ್ ಮಾಡಿ ತಮ್ಮ ಖದರ್ ತೋರಿದ್ದಾರೆ. ಈ
ವಿಜಯಪುರ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳನ್ನು ಕಡಿವಾಣ ಹಾಕಲು ಪೊಲೀಸರು ತಮ್ಮ ಪಿಸ್ತೂಲ್ ಮೂಲಕ ಜವಾಬಾ ಕೊಟ್ಟಿದ್ದಾರೆ .
ಕಳೆದ ಜನವರಿ 28 ರಂದು ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಅರಕೇರಿ ಎಲ್ ಟಿ 1 ರ ಮಾನವರ ದೊಡ್ಡಿ ಬಳಿ ನಡೆದಿದ್ದ ಶೂಟೌಟ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಕೋಲೆ ಪ್ರಕರಣ ಆರೋಪಿ ಸುರೇಶ ರಾಠೋಡ್ ಮೇಲೆ ಮೇಲೆ ಪೊಲೀಸ್ ರು ಪೈರಿಂಗ್ ಮಾಡಿದ್ದಾರೆ.
ಆರೋಪಿ ಸುರೇಶ ರಾಠೋಡ್ ಕಾಲಿಗೆ ಗುಂಡು ತಗುಲಿದೆ. ವಿಜಯಪುರ ನಗರದ ಹೊರ ಭಾಗದ ಮಹಿಳಾ VV ಬಳಿ ಘಟನೆ ನಡೆದಿದೆ. ಕೊಲೆಗೆ ಕಂಟ್ರಿ ಪಿಸ್ತೂಲು ಸಪ್ಪೆ ಮಾಡಿದ್ದ ಆರೋಪಿ ಸುರೇಶ್ ಗೆ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯ PSI ವಿನೋದ ತಮ್ಮ ಜೀವ ರಕ್ಷಣೆಗೆ ಸುರೇಶ ಮೇಲೆ ಗುಂಡು ಹಾರಿಸಿದ್ದಾರೆ.
ಖಚಿತ ಮಾಹಿತಿ ಪಡೆದು ಆರೋಪಿ ಸುರೇಶ ರಾಠೋಡ್ ಬಂಧಿಸಲು ತೆರಳಿದ್ದ ವಿಜಯಪುರ ಗ್ರಾಮೀಣ ಪೊಲೀಸರ ಮೇಲೆ ಆರೋಪಿ ಸುರೇಶ ರಾಠೋಡ್ ಚಾಕುವಿನಿಂದ ದಾಳಿ ಮಾಡಿದ ಸುರೇಶನ ಮೇಲೆ ಪೊಲೀಸರು ತಮ್ಮ ಕಾಕಿ ಖದರ್ ತೋರಿದ್ದಾರೆ. ಸತೀಶ್ ಕೊಲೆಗೆ ಕಂಟ್ರಿ ಪಿಸ್ತೂಲ್ ಪೂರೈಕೆ ಮಾಡಿದ್ದ, ಮದ್ಯಪ್ರದೇಶದಿಂದ ಕಂಟ್ರಿ ಪಿಸ್ತೂಲ್ ತಂದು ಕೊಟ್ಟಿದ್ದ ಆರೋಪಿ ಸುರೇಶ ರಾಠೋಡ್ ನಗರದ ಹೊರ ಭಾಗದಲ್ಲಿ ಅಥಣಿ ರಸ್ತೆಯ ಬಳಿ ಅಡಗಿ ಕುಳಿತಿದ್ದ. ಈ ಫೈರಿಂಗ್ ನಲ್ಲಿ PSI ವಿನೋದ ದೊಡಮನಿ ಹಾಗೂ ಒರ್ವ ಸಿಬ್ಬಂದಿಗೆ ಗಾಯಗಳಾಗಿವೆ. ಸದ್ಯ ನಗರದ ಖಾಸಗಿ ಆಸ್ಪತ್ರೆಗೆ PSI ಹಾಗೂ ಪೊಲೀಸ್ ಕಾನ್ಸಸ್ಟೇಬಲ್ ದಾಖಲಿಸಲಾಗಿದೆ. ಆಸ್ಪತ್ರೆಗೆ SP ಲಕ್ಷ್ಮಣ್ ನಿಂಬರಗಿ ಹಾಗೂ ಎಎಸ್ಸಿ ರಾಮನಗೌಡ ಹಟ್ಟಿ ಹಾಗೂ ಇತರ ಅಧಿಕಾರಿಗಳ ಭೇಟಿ ನೀಡಿದ್ದಾರೆ.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ SPಲಕ್ಷ್ಮಣ ನಿಂಬರಗಿ, ಕಳೆದ 28 ರಂದು ಸತೀಶ ರಾಠೋಡ್ ಕೊಲೆ ನಡೆದಿತ್ತು. ಪ್ರಕರಣದ ಆರೋಪಿ ನಗರದ ಹೊರವಲಯದಲ್ಲಿ ಬಚ್ಚಿ ಕುಳಿತಿದ್ದ ಅವನನ್ನು ಹಿಡಿಯಲು ಹೋದಾಗ ಅವನು ನಮ್ಮ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದರಿಂದ ಆರೋಪಿ ಕಾಲಿಗೆ ಗುಂಡು ಹಾರಿಸಲಾಗಿದೆ. ನಮ್ಮ ಅಧಿಕಾರಿ ಹಾಗೂ ಸಿಬ್ಬಂದಿ ಕೈಗೆ ಗಾಯವಾಗಿದೆ. ಜೀವ ರಕ್ಷಣೆಗಾಗಿ ಆತನ ಕಾಲಿಗೆ ಗುಂಡು ಹಾರಿಸಲಾಗಿದೆ ಎಂದರು. ಗುಂಡೇಟಿನಿಂದ ಗಾಯಗೊಂಡ ಸುರೇಶನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದರು.

